ಚಳ್ಳಕೆರೆ : ದಲಿತ ಸಂಘಟನೆಗಳ ಮಹಾ ಒಕ್ಕೂಟ ( ಬಹುಜನವಾದ ) ವತಿಯಿಂದ ಭೀಮಾ-ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸುವುದರ ಮುಖೇನ ಆಚರಿಸಿ
ಭೀಮಾ-ಕೋರೆಗಾಂವ್ ವಿಜಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು.

ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟ (ಬಹುಜನವಾದ ) ಅಧ್ಯಕ್ಷರಾದ ಉಮೇಶ್ ಚಂದ್ರ ಬ್ಯಾನರ್ಜಿ, ಉಪಾಧ್ಯಕ್ಷರಾದ ಕೆ.ಪೆನ್ನೇಶ್, ಖಜಾಂಚಿಯಾದ ರವಿಕುಮಾರ್, ಎಸ್ ನನ್ನಿವಾಳ ಸದಸ್ಯರಾದ ಸುರೇಶ್.ಆರ್ , ವಾಲ್ಮೀಕಿ ನಗರ ಮತ್ತು ಹಿರಿಯ ಹೋರಾಟಗಾರು ಎಂ ಶಿವಮೂರ್ತಿ, ಮತ್ತು ಭೀಮನಕೆರೆ ಶಿವಮೂರ್ತಿ , ದ್ಯಾಮಣ್ಣ ಮೈತ್ರಿ, ಡಿ ಚಂದ್ರು, ಜೆಕೆ ತಿಪ್ಪೇಶ್, ಈಶ್ವರ್ ನಾಯಕ, ಜಗದೀಶ್, ಇನ್ನು ಮುಂತಾದ ದಲಿತ ಮುಖಂಡರುಗಳು ಉಪಸ್ಥಿತಿ ಇದ್ದರು

Namma Challakere Local News
error: Content is protected !!