ಚಳ್ಳಕೆರೆ : ಸಾರ್ವಜನಿಕ ಸೇವೆಯಲ್ಲಿ ಸದಾ ಮುಂದಿರುವಂತಹ ಕುಟುಂಬ ಶ್ರೀರಾಮ್ ಗ್ರೂಪ್ಸ್ ಸಹೋದರರು, ಸದಾ ಒಂದಿಲ್ಲೊಂದು ಒಂದು ರೀತಿಯ ಸಾರ್ವಜನಿಕರಕಗೆ ಉಪಯೋಗವಾಗುವಂತಹ ಸಾರ್ವಜನಿಕ ಸೇವೆಗಳನ್ನು ನೀಡುತಿದ್ದಾರೆ, ಅವರ ಹಾದಿ ಸುಗಮವಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಚಳ್ಳಕೆರೆ ನಗರದ ಹೊಟ್ಟೆಪ್ಪನಹಳ್ಳಿ ಗೇಟ್ ಬಳಿ ಶ್ರೀರಾಮ್ ಗ್ರೂಪ್ಸ್ ವತಿಯಿಂದ ನೂತನವಾಗಿ ಪ್ರಾರಂಭಿಸಿದ ಶ್ರೀರಾಮ ಪೆಟ್ರೋಲ್ ಬಂಕ್ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಓಬಳೇಶ್, ಬಾಳೆಕಾಯಿ ರಾಮದಾಸ್, ಬಾಳೆಕಾಯಿ ವೆಂಕಟೇಶ್,
ವಿಧಾನ ಪರಿಷತ್ ಸದಸ್ಯ ಕೆಎಸ್.ನವೀನ್,
ನಗರಸಭೆ ಅಧ್ಯಕ್ಷರಾದ ಶಿಲ್ಪ, ಸದಸ್ಯರಾದ ರಾಘವೇಂದ್ರ, ನಾಮ ನಿರ್ದೇಶನ ಸದಸ್ಯರಾದ ವೀರಭದ್ರ, ಬಡಗಿ ಪಾಪಣ್ಣ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಸುರೇಶ್ ಕುಮಾರ್, ಮುಖಂಡರಾದ ತಿಪ್ಪೇಸ್ವಾಮಿ, ಲಕ್ಷ್ಮೀದೇವಿ, ಪ್ರಹ್ಲಾದ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

