ಚಳ್ಳಕೆರೆ : ಬೆಂಗಳೂರಿಗೆ ಯಾವುದೇ ನದಿಯ ಆಸರೆಯಿಲ್ಲ ಹಾಗಾಗಿ ಮುಂದಿನ ಪೀಳಿಗೆಗೆ ನೀರಿನ ತೊಂದರೆಯಾಗಬಾರದೆAಬ ಸದುದ್ದೇಶ ಅದರ ಹಿಂದಿತ್ತು ಅದರ ಜೊತೆಗೆ ನಗರದಲ್ಲಿ ಗಿಡಮರಗಳನ್ನು ನೆಟ್ಟು ಪರಿಸರ ಪ್ರೇಮಿ ಎನಿಸಿಕೊಂಡಿದ್ದರೂ ಈಗಲೂ ಸಹ ನಾವು ಬೆಂಗಳೂರು ನಗರಕ್ಕೆ ಹೋದಾಗ ಬೃಹತ್ ಮರಗಳನ್ನು ಹಾಗೂ ಉದ್ಯಾಹನ ವನಗಳನ್ನು ಕಾಣಬಹುದು ಎಂದು ಮಾಜಿ ಗ್ರಾಪಂ ಸದಸ್ಯ ಜಿ.ಗಂಗಾಧರ್ ಅಭಿಪ್ರಾಯ ಪಟ್ಟರು.

ನಗರದ ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ಒಕ್ಕಲಿಗ ಸಮುದಾಯದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದಲ್ಲಿ ಮಾತನಾಡಿದರು. ಬೆಂಗಳೂರು ಕಟ್ಟುವ ನಿಟ್ಟಿನಲ್ಲಿ ಕೆಂಪೇಗೌಡರು ಅದೆಷ್ಟು ಮಹತ್ವಾಕಾಂಕ್ಷಿಯಾಗಿದ್ದರೆAದರೆ ಈ ಪ್ರದೇಶದ ಸಂಪನ್ಮೂಲಗಳನ್ನು ಅರಿತು ಮುಂದಿನ ಜನಾಂಗಕ್ಕೆ ಬೇಕಾಗದ ಅಗತ್ಯ ಮೂಲ ಸೌಕರ್ಯಗಳನ್ನು ಅವರು ಆಗಲೇ ನಿರ್ಮಿಸಿದ್ದರು, ಊರು ಕಟ್ಟಿದ ಮೇಲೆ ಜನಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟಿಕೆ ಕೊಳ್ಳಲು ನೀರು ಸಂಗ್ರಹಣೆ ಕೆರೆ, ಕಲ್ಯಾಣಿ, ಕೃಷಿ ಹೊಂಡಗಳನ್ನು ನಿರ್ಮಿಸಿ ಒಂದು ಕರೆ ತುಂಬಿದರೆ ಮೊತ್ತೊಂದು ಕೆರೆಗೆ ನೀರು ಹರಿದು ಹೋಗುವಂಥ ಸೌಕರ್ಯಗಳನ್ನು ಆಗಲೇ ಕಲ್ಪಿಸಿದ್ದರು. ಅವರ ಅಧಿಕಾರವಧಿಯಲ್ಲಿ ನಿರ್ಮಿದ ಹಲವು ಯೋಜನೆಗಳನ್ನು ಈಗಲೂ ಸಹ ಅವಳಡಿಸಿಕೊಳ್ಳಲಾಗುತ್ತಿದೆ ಎಂದರು.

ಗ್ರಾಮದ ಹಿರಿಯ ನಾಗರೀಕರಾದ ತಿಮ್ಮಾರೆಡ್ಡಿ ಉಪನ್ಯಾಸ ನೀಡುತ್ತಾ, ಬೆಂಗಳೂರು ಎಂಬ ಹೆಸರಿನ ಜಗತ್ಪçಸಿದ್ದ ನಗರವಾಗಿ ಬೆಳೆಸಲು ಕಾರಣರಾದವರು ಈ ಪ್ರಾಂತ್ಯದ ಅರಸ ಕೆಂಪೇಗೌಡ ಅವರ ಸಂಸ್ಮರಣಾ ದಿವಸವಿದು ಹಾಗಾಗಿಯೇ ಜೂ 27 ರಂದು ಕೆಂಪೇಗೌಡ ಜಯಂತೋತ್ಸವವನ್ನು ಆಚರಿಸಲಾಗುತ್ತಿದೆ. 1537 ರಲ್ಲಿ ಬೆಂದಕಾಳೂರು ಎಂಬ ನಗರವನ್ನು ಕಟ್ಟುವ ಮೂಲಕ, ಬೆಂದಕಾಳೂರಿನ ನಿರ್ಮಾಣವಾಗುವ ಮೊದಲು ಕೆಂಪೇಗೌಡರು ವಿಜಯನಗರದ ಅರಸರಿಗೆ ಸಾಮಂತರಾಗಿದ್ದರು ಎಂದು ತಿಳಿಸಿದರು.

ಇನ್ನೂ ಗ್ರಾಮಸ್ಥರಾದ ಮಲ್ಲೆಶ್ ಮಾತನಾಡಿ, ಕೆಂಪೆಗೌಡರು ಬೆಂಗಳೂರು ನಗರ ಸಂಸ್ಥಾಪಕರು, ಅಂದು ಅವರು ಮಾಡಿದ ಕೆಲಸಗಳು ಇಂದು ಚಿರಸ್ಮರಣೀಯವಾಗಿದೆ ಎಲ್ಲಾ ಸರ್ವ ಧರ್ಮಗಳು ಸಮಾನತೆ ಕಾಪಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ನೂರಾರು ವರ್ಷಗಳ ದೂರದೃಷ್ಟಿ ಇಟ್ಟುಕೊಂಡ ಮಹಾನ್ ನಾಯಕ ಎಂದರೆ ಅದು ಕೆಂಪೇಗೌಡರು ಮಾತ್ರ, ಅವರ ಕುಟುಂಬಕ್ಕೆ ವಿಜಯ ನಗರ ಸಾಮಾಜ್ರದಿಂದ ಸಹಕಾರದಿಂದ ಜನಪರ ಸೇವೆಗಳನ್ನು ಮಾಡಿದ್ದಾರೆ ಎಂದು ಮೆಲುಕು ಹಾಕಿದರು.

ಇದೇ ಸಂಧರ್ಭದಲ್ಲಿ ಗ್ರಾಪಂ. ಉಪಾಧ್ಯಕ್ಷ ಸೇವ್ಯಾನಾಯ್ಕ್, ಸದಸ್ಯೆ ಅಶ್ವಿನಿ ರುದ್ರಣ್ಣ, ಮಂಜುಳಾ ತಿಪ್ಪೆಶ್, ಗೊವಿಂದಪ್ಪರ ರಾಜಣ್ಣ, ಗೌಡರ ಚೆನ್ನಪ್ಪ, ಡ್ರೈವರ್ ಚೆನ್ನಪ್ಪ, ಹನುಂತರಾಯ್, ವಸಂತ, ಓಬಣ್ಣ, ತಿಪ್ಪೆಶ್, ಇತರರು ಇದ್ದರು.

Namma Challakere Local News
error: Content is protected !!